ಈ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಲ್ಲಿ ಸಿಗುವ ವಿಶ್ವನಾಥ ಸರ್ಕಲ್ ಬಳಿ ಪ್ರಯಾಣಿಕರ ತಂಗುದಾಣವಿದೆ. ಸದಾ ಜನದಟ್ಟಣೆಯಿಂದ ಕೂಡಿರುವ ಈ ಜಾಗದಲ್ಲಿ ಬೆಳಗಿನ ಹೊತ್ತು ತರಕಾರಿ ಸೊಪ್ಪಿನ ವಹಿವಾಟು ನಡೆಯುತ್ತದೆ. ಸದಾ ಜನರಿಂದ ಗಿಜಿಗುಡುತ್ತಿರುವ ಇಲ್ಲಿಗೆ ಅನತಿ ದೂರದಲ್ಲಿ ಸಾರ್ವಜನಿಕ ಆಸ್ಪತ್ರೆ ಇದೆ. ವೃತ್ತದ ಎಡಗಡೆಗೆ ನ್ಯಾಯಾಲಯದ ಸಂಕೀರ್ಣವಿದೆ. ಈ ಜಾಗದಲ್ಲಿ ರಸ್ತೆಯಲ್ಲಿ ಗುಂಡಿಗಳು ತುಂಬಿದ್ದು ಅಫಘಾತದ ಸಾದ್ಯತೆಗಳು ಹೆಚ್ಚಿವೆ.