ಗ್ರಾಮದಿಂದ ಪಟ್ಟಣದ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ರಸ್ತೆ ಬದಿಯಲ್ಲಿ ಜಾಲಿ ಪೊದೆಗಳಿರುವುದರಿಂದ ಎತ್ತಲಿಂದ ಯಾವ ವನ್ಯ ಪ್ರಾಣಿ ಬರುವುದೋ ಎಂಬ ಆತಂಕದಲ್ಲಿ ಗ್ರಾಮಸ್ಥರು ಸಂಚರಿಸಬೇಕಿದೆ. ಹಲ ಬಾರಿ ಕಾಡು ಹಂದಿ, ಕರಡಿ ದಾಳಿಗೆ ದಾರಿ ಹೋಕರು ತುತ್ತಾಗಿದ್ದಾರೆ.
ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು. ಶೀಘ್ರ ಗ್ರಾಮಕ್ಕೆ ಸಮರ್ಪಕ ರಸ್ತೆ ಹಾಕಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.