ನೂರಾರು ಎಕರೆ ಜಮೀನುಗಳಲ್ಲಿ ರಾಗಿ, ಜೋಳ ಮತ್ತು ತೋಗರಿಗಳನ್ನು ಬಿತ್ತನೆ ಮಾಡಲಾಗುತ್ತದೆ. ಈ ಬಾರಿ ಮೊದಲ ಹಂತದಲ್ಲಿ ಬಿತ್ತನೆ ಮಾಡಿದ ರಾಗಿ ಕಟ್ಟಾವಿಗೆ ಬಂದ್ದಿದು ಅಧಿಕ ಮಳೆಗೆ ಅಲ್ಲಲಿ ತೆನೆಯಲ್ಲಿ ಮೊಳಕೆಗಳು ಕಂಡು ಬಂದಿದೆ. ಎರಡು, ಮೂರನೇ ಹಂತದಲ್ಲಿ ಬಿತ್ತನೆ ಮಾಡಿರುವ ರಾಗಿ ಜೋಳ, ತೊಗರಿಗೆ ವಿವಿಧ ಕೀಟಗಳ ದಾಳಿಗೊಳಗಾಗಿದ್ದು, ರೈತರಿಗೆ ನೆಮ್ಮದ್ದಿ ಇಲ್ಲದಂತಾಗಿದೆ.