ಇದಕ್ಕೆ ಎರಡೂ ಇಲಾಖೆ ಅಧಿಕಾರಿಗಳು ಆಗಲಿ ಸರ್ ಎನ್ನುತ್ತಿದ್ದಂತೆ, ಸಚಿವರು ‘ಇನ್ನೂ ಮೂರ್ ತಿಂಗ್ಳು ಟೈಮಿದೆ. ಅಷ್ಟರೊಳಗೆ ರಸ್ತೆ ನಿರ್ಮಿಸಿ. ಮಾಧ್ಯಮದವರು ಇಲ್ಲೇ ಇದ್ದಾರೆ. ಜನವರಿ 1ರಂದು ಬಸ್ ಸಂಚಾರ ಆರಂಭಗೊಳ್ಳದಿದ್ದರೆ, ‘ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ’ ಎಂದು ಬರೆದು ನನ್ನ ಮರ್ಯಾದೆ ಹರಾಜಾಕ್ತಾರೆ ಎಂಬುದು ನೆನಪಿರಲಿ’ ಎನ್ನುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತು.