ನವದೆಹಲಿ, ಅ. 7– ರಾಜ್ಯಗಳ ಸಮ್ಮಿಶ್ರ ಸರಕಾರಗಳಲ್ಲಿ ಕಾಂಗ್ರೆಸ್ ಪಕ್ಷವು ಭಾಗವಹಿಸುವುದನ್ನು ಹಾಗೂ ಬೆಂಬಲ ಕೊಡುವುದನ್ನು ನಿರ್ಧರಿಸುವ ಖಚಿತವಾದ ತತ್ವಗಳನ್ನು, ನೀತಿಗಳನ್ನು ಮತ್ತು ಕಾರ್ಯವಿಧಾನಗಳನ್ನು ರೂಪಿಸಬೇಕೆಂದು ಮುಂಬರುವ ಜಬ್ಬಲ್ಪುರದ ಎ.ಐ.ಸಿ.ಸಿ. ಅಧಿವೇಶನದಲ್ಲಿ ಕಾಂಗ್ರೆಸ್ ಸಮಾಜವಾದಿ ವೇದಿಕೆ ಒತ್ತಾಯಪಡಿಸುವುದು.