ಸಂದೀಪ, ಸುನಂದಾ, ಸಂದೇಶ್, ಜಗನ್ನಾಥ, ಲತಿ, ರಾಜ, ಬಾಬು, ಕಾಜೋಲ್, ಲಚ್ಚಾ, ಮೇಘನಾ, ರಂಜನ್ ಕಳೆದ ತಿಂಗಳು 12ರಂದು ವ್ಯಾಪಾರಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದರು. ಎಲ್ಲರೂ ವೀಸಾ, ಪಾಸ್ಪೋರ್ಟ್ ಸೇರಿದಂತೆ ಅಗತ್ಯ ದಾಖಲೆ ಹೊಂದಿದ್ದಾರೆ. ಬಂಧನಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ವಾರದ ಹಿಂದೆ ತಂಡದ ಸದಸ್ಯ ರಂಜನ್ ಕಳುಹಿಸಿದ ವಾಟ್ಸ್ ಆ್ಯಪ್ ಸಂದೇಶದಿಂದ ಅವರ ಬಂಧನದ ಮಾಹಿತಿ ಸಿಕ್ಕಿದೆ ಎಂದು ಜನಾಂಗದ ಮುಖಂಡರು ತಿಳಿಸಿದ್ದಾರೆ.