ಅರ್ಕಾವತಿ ನದಿ ಪುನಶ್ಚೇತನ ಹೋರಾಟ ಸಮಿತಿ ಸಂಚಾಲಕರಾದ ಮಂಜುನಾಥ್ ಹಾಗೂ ಚಿದಾನಂದ್, ‘ನಗರದ ಹೃದಯ ಭಾಗವಾಗಿರುವ ನಾಗರಕೆರೆ ಸೂಕ್ತ ರಕ್ಷಣೆ ಇಲ್ಲದೆ ಸಣ್ಣ ನೀರಾವರಿ ಇಲಾಖೆ, ನಗರಸಭೆ ಎರಡರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆರೆ ಅಂಗಳಕ್ಕೆ ಯಾರು ಏನು ತಂದು ರಾಶಿ ಹಾಕಿ ಹೋದರೂ ಕೇಳುವವರೆ ಇಲ್ಲದಾಗಿದೆ’ ಎಂದಿದ್ದಾರೆ.