ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರುಗಟ್ಟಿ ನಾಲ್ಕು ಕಾರ್ಮಿಕರ ಸಾವು

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ದಿನ್ನೇನಹಳ್ಳಿಯಲ್ಲಿ ಭಾನುವಾರ ಸಂಪು ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ನಾಲ್ಕು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.

ನಾಗಪ್ಪ (65), ಪೆದ್ದಣ್ಣ ( 39), ನಾರಾಯಣಪ್ಪ(35), ಜನಾರ್ದನ (34) ಮೃತಪಟ್ಟವರು.ನಾಗಪ್ಪ ಮತ್ತು ಪೆದ್ದಣ್ಣ ಸಂಪಿನೊಳಗೆ ಮೊದಲು ಇಳಿದಿದ್ದರು. ಇವರು ಮೇಲೆ ಬಾರದಿದ್ದಾ‌ಗ ಆತಂಕಗೊಂಡ ನಾರಾಯಣಪ್ಪ ಮತ್ತು ಜನಾರ್ದನ್ ಸಹ ಇಳಿದಿದ್ದಾರೆ. ನಾರಾಯಣಪ್ಪ ಸಹ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಜನಾರ್ದನ್ ಅವರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವಿಗೀಡಾದರು.

ದುರಂತಕ್ಕೆ ಸಂಪ್ ಮಾಲೀಕ ರಾಮಕೃಷ್ಣಪ್ಪ ಕಾರಣ ಎಂದು ಗ್ರಾಮಸ್ಥರು ಅವರನ್ನು ಮನೆಯಲ್ಲಿ ಕೂಡಿ ಹಾಕಿಥಳಿಸಿದ್ದಾರೆ.

ಸ್ಥಳಕ್ಕೆ ಬಂದ ಮಂಚೇನಹಳ್ಳಿ ಪೊಲೀಸರು ರಾಮಕೃಷ್ಣಪ್ಪ ಅವರನ್ನು ಬಂಧಿಸಿದರು. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT