ಬೆಂಗಳೂರು: ನಗರದ ಎಚ್.ಬಿ.ರಾಜುಗೌಡ ಮತ್ತು ಆನಂದ ಶ್ರೀನಿವಾಸನ್ ಅವರು ಕ್ವಾಲಾಲಂಪುರದಲ್ಲಿ ನವೆಂಬರ್ನಲ್ಲಿ ನಡೆಯಲಿರುವ ವಿಶ್ವ ಅಮೆಚೂರ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಗಾಲ್ಫ್ ಸಂಸ್ಥೆಯಲ್ಲಿ ನಡೆದ ಒಂಬತ್ತನೇ ವಾರ್ಷಿಕ ಕಾರ್ನರ್ ಸ್ಟೋನ್ ಕಪ್ ಗಾಲ್ಫ್ ಉತ್ಸವದಲ್ಲಿ ಉತ್ತಮ ಸಾಮರ್ಥ್ಯ ತೋರಿಸಿ ಇವರಿಬ್ಬರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇತರ ವಿಭಾಗಗಗಳಲ್ಲಿ ದೆಹಲಿಯ ಉದಯ್ ಕುಮಾರ್, ಬೆಂಗಳೂರಿನ ಪ್ರತಾಪ್ ಸಿಂಗ್, ಮುಂಬೈನ ಹರೇಶ್ ಪಟೇಲ್ ಆಯ್ಕೆಯಾಗಿದ್ದಾರೆ.
ನಾಲ್ಕು ದಿನ ನಡೆದ ಗಾಲ್ಫ್ ಉತ್ಸವದಲ್ಲಿ ಹಿರಿಯ ಕ್ರಿಕೆಟಿಗರಾದ ಕಪಿಲ್ದೇವ್, ವೆಂಕಟೇಶ ಪ್ರಸಾದ್, ವೆಂಕಟಪತಿ ರಾಜು, ಸುಜಿತ್ ಸೋಮಸುಂದರ್, ಅಥ್ಲೀಟ್ ಅಶ್ವಿನಿ ನಾಚಪ್ಪ, ಭಾರತ ಕ್ರಿಕೆಟ್ ತಂಡದ ಆಟಗಾರ ಕರುಣ್ ನಾಯರ್ ಮುಂತಾದವರು ಪಾಲ್ಗೊಂಡು ಗಮನ ಸೆಳೆದರು.