‘ಈಗ ಒಂದೆಡೆ ಕುಳಿತು ಪ್ರತಿಭಟನೆ ಮಾಡಿದರೆ, ಬಿಬಿಎಂಪಿಗೆ ಬಿಸಿ ಮುಟ್ಟುವುದಿಲ್ಲ. ಹೀಗಾಗಿ ಆಟೊಗೆ ರೆಕ್ಕೆ ಕಟ್ಟಿಕೊಂಡು ಸುತ್ತುತ್ತಿದ್ದೇನೆ. ಸರ್ಕಾರಕ್ಕೆ ಗುಂಡಿಗಳೇ ರಸ್ತೆಯಾಗಿರುವಾಗ, ನನ್ನ ಆಟೊ ಏಕೆ ಹೆಲಿಕಾಪ್ಟರ್ ಆಗಬಾರದು ಎಂದು ಜನರನ್ನು ಪ್ರಶ್ನಿಸುತ್ತಿದ್ದೇನೆ. ಇದನ್ನು ನೋಡಿ ಜನ ನಗುತ್ತಿದ್ದು, ಆ ನಗುವನ್ನು ಸರ್ಕಾರದ ನಿರ್ಲಕ್ಷ್ಯಕ್ಕೆ ಅರ್ಪಿಸುತ್ತೇನೆ’ ಎಂದು ವ್ಯಂಗ್ಯವಾಗಿ ಹೇಳಿದರು.