ಕುಂದನೂರು, ಚಾಮನೂರು, ಕಡಬೂರು, ಕೊಂಚೂರು, ರಾವೂರು, ಬಳವಡ್ಗಿ, ನಾಲವಾರ, ಲಾಡ್ಲಾಪುರ, ಹಲಕರ್ಟಿ, ಕೊಲ್ಲೂರು, ತರಕಸಪೇಟ್, ಹಣ್ಣೀಕೇರಾ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ತೊಗರಿ ಬೆಳೆ, ಸತತ ವರ್ಷಧಾರೆಗೆ ಹಾಳಾಗಿ ಹೋಗುತ್ತಿವೆ. ಇದರಿಂದ ತೊಗರಿ ಬೆಳೆಯ ಇಳುವರಿಯಲ್ಲಿ ಭಾರಿ ಪ್ರಮಾಣದ ಕುಂಠಿತವಾಗುವ ಲಕ್ಷಣಗಳು ದಟ್ಟವಾಗಿವೆ.