ನನ್ನ ಅಜ್ಜಿ ವೇದವಲ್ಲಿ ಅಲಿಯಾಸ್ ಸಂಧ್ಯಾ(ತಂದೆಯ ತಾಯಿ) ಚೆನ್ನೈ ಹಾಗೂ ಸುತ್ತಮುತ್ತ ಸ್ವತ್ತುಗಳನ್ನು ಖರೀದಿಸಿದ್ದರು. 1971ರಲ್ಲಿ ಅವರು ಮೃತಪಟ್ಟರು. ಅವರ ಮಕ್ಕಳಾದ ಜಯಕುಮಾರ್ ಮತ್ತು ಜಯಲಲಿತಾ ‘ವೇದ ನಿಲಯಂ’ನಲ್ಲಿ ವಾಸಿಸುತ್ತಿದ್ದರು. ಜಯಲಲಿತಾ ನಿಧನದ ಬಳಿಕ, ಹಿಂದು ಕುಟುಂಬ ಕಾಯ್ದೆ 1956ರ ಅನ್ವಯ, ಎರಡನೇ ತಲೆಮಾರಿನವರಾದ ನಾನು ಮತ್ತು ನನ್ನ ಸಹೋದರ ಜೆ.ದೀಪಕ್ ಈ ಸ್ವತ್ತಿಗೆ ವಾರಸುದಾರರಾಗಿದ್ದೇವೆ. ನನ್ನನ್ನು ಸಂಪರ್ಕಿಸದೆ ರಾಜ್ಯ ಸರ್ಕಾರ, ಜಯಲಲಿತಾ ಅವರ ನಿವಾಸವನ್ನು ಸ್ಮಾರಕವಾಗಿ ಬದಲಿಸಲು ನಿರ್ಧರಿಸಿದೆ ಎಂದು ಈ ಅರ್ಜಿಯಲ್ಲಿ ದೀಪಾ ಉಲ್ಲೇಖಿಸಿದ್ದಾರೆ.