‘ಅವರು ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಆದರೆ, ಯಾವ ಅಧಿಕಾರ ಬಯಸಲಿಲ್ಲ. ಸಭೆಯೊಂದರಲ್ಲಿ ಒಂದೇ ಆಸನವಿದ್ದ ಸಂದರ್ಭದಲ್ಲಿ ತಮ್ಮ ಜತೆಗಿದ್ದ ಶ್ರೀಗಳನ್ನು ಆಸನದ ಮೇಲೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ತಾವು ನೆಲದ ಮೇಲೆ ಕುಳಿತುಕೊಂಡರು. ಚಿತ್ತರಗಿ ಮಹಾಂತಜ್ಜನ ದರ್ಶನಕ್ಕೆ ಬಂದಾಗ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೆ ಪಾದಚಾರಿಯಾಗಿ ಮಠಕ್ಕೆ ಬಂದಿದ್ದರು. ಇದು ಅವರ ಕಿಂಕರ ಭಾವವನ್ನು ತೋರಿಸುತ್ತದೆ’ ಎಂದು ತಿಳಿಸಿದ್ದಾರೆ.