ಕಾರ್ಯಾಚರಣೆ ಸ್ವರೂಪ ಹೀಗಿತ್ತು: ದಸರೆಯಲ್ಲಿ ಭಾಗವಹಿಸಿದ್ದ ಅರ್ಜುನ, ಅಭಿಮನ್ಯು ಹಾಗೂ ಕೃಷ್ಣ ಆನೆಗಳನ್ನು ಕರೆಸಿಕೊಂಡು ಹುಲಿಗಾಗಿ ಹುಡುಕಾಟ ನಡೆಯಿತು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ನಂತರ, ಡ್ರೋಣ್ ಕ್ಯಾಮೆರಾ ಬಳಸಿ ಪರಿಶೀಲನೆ ನಡೆಸಿದಾಗ ಹೊಲವೊಂದರಲ್ಲಿ ಕರುವೊಂದರ ಮಾಂಸ ತಿನ್ನುತ್ತಿರುವುದು ಗೋಚರಿಸಿದೆ.