ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಮೇಶ್ ಬಾಬು, ಡಿ.ವೈ.ಎಸ್.ಪಿ. ಶಿವಾರೆಡ್ಡಿ ತನಿಖಾ ತಂಡದ ಇನ್ನುಳಿದ ಇಬ್ಬರು ಸದಸ್ಯರು. ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಪೋಷಕರು ಮೃತಪಟ್ಟಿದ್ದಾರೆ ಎಂದು ಪ್ರತಿಭಟಿಸಿ ರವಿ ತನ್ನ ತಾಯಿ ತಿಪ್ಪಮ್ಮ ಅವರ ಶವವನ್ನು ಭುಜದ ಮೇಲೆ ಎತ್ತುಕೊಂಡು ಹೋಗಿದ್ದರು. ಅಷ್ಟೇ ಅಲ್ಲ, ಇಬ್ಬರ ಶವವನ್ನು ಆಟೊದಲ್ಲಿ ಸಾಗಿಸಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.