‘ಯಲಹಂಕ ಸಮೀಪದ ಬೆಲ್ಲಹಳ್ಳಿ, ಕಣ್ಣೂರು, ಸಾತನೂರು ಹಾಗೂ ಬಾಗಲೂರು ಕ್ವಾರಿಗಳಲ್ಲಿ ಕಸ ಸುರಿಯದಂತೆ ಸ್ಥಳೀಯರು ಇತ್ತೀಚೆಗೆ ಪ್ರತಿಭಟನೆ ಮಾಡಿದ್ದರು. ಇದರಿಂದ 8–10 ದಿನಗಳಿಂದ ಕಸ ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗಿತ್ತು. ನಗರದಲ್ಲಿ ಉತ್ಪತ್ತಿಯಾದ ಹೆಚ್ಚುವರಿ ಕಸವನ್ನು ಒಮ್ಮೆಲೇ ಸಾಗಣೆ ಮಾಡಿದ್ದರಿಂದ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಭೂಭರ್ತಿ ಘಟಕಗಳಲ್ಲಿ ಕಸ ವಿಲೇವಾರಿ ಮಾಡಲು ಕಷ್ಟವಾ
ಗಿತ್ತು. ಒಂದು ಲೋಡ್ ಕಸ ವಿಲೇವಾರಿಗೆ 4–5 ಗಂಟೆಗಳು ಹಿಡಿಯುತ್ತಿತ್ತು. ಸದ್ಯಕ್ಕೆ ಕಸ ವಿಲೇವಾರಿ ಸುಸೂತ್ರವಾಗಿ ನಡೆಯುತ್ತಿದೆ’ ಎಂದು ವಿವರಿಸಿದರು.