ಆದರೆ 20 ದಿನಗಳಿನಿಂದ ಹಿಂಗಾರು ಮಳೆ ಕಡೂರು ತಾಲ್ಲೂಕಿನಾದ್ಯಂತ ತೃಪ್ತಿಕರವಾಗಿ ಸುರಿದಿದೆ. ಮಳೆ ಕೊರತೆಯಿಂದ ಖಾಲಿ ಇದ್ದ ಹೊಲಗಳಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಇದೀಗ ಮಳೆ ಬಂದಿದ್ದರಿಂದ ಒಣಗುವ ಹಾದಿ ಹಿಡಿದಿದ್ದ ರಾಗಿ ಬೆಳೆ ನಳನಳಿಸುತ್ತಿದೆ. ಇನ್ನೊಂದು ತಿಂಗಳ ಅವಧಿಯಲ್ಲಿ ಒಂದೆರಡು ಬಾರಿ ಅತ್ಯಲ್ಪ ಮಳೆ ಬಂದರೂ ರಾಗಿ ಬೆಳೆ ಕೈಗೆ ಸಿಗಬಹುದು ಎಂಬ ನಿರೀಕ್ಷೆ ರೈತರದ್ದು.