ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಿಯ ಸತ್ಯ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಿಂದೊಮ್ಮೆ ಕಾಂಗ್ರೆಸ್ ಸಚಿವರಾಗಿದ್ದ ವಿ.ಎಸ್. ಕೌಜಲಗಿಯವರು ಅವರ ಪರ್ಸ್ ಪಿಕ್‌ಪಾಕೆಟ್ ಆಗಿದ್ದಾಗ ‘ಕಾಂಗ್ರೆಸ್‌ನಲ್ಲಿ ಕಿಸೆಗಳ್ಳರಿದ್ದಾರೆ’ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದರು! ಈಗ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರ ಸರದಿ! ಕಾಂಗ್ರೆಸ್‌ನಲ್ಲಿ ಕಳ್ಳರಿರುವುದು ನಿಜ, ಆದರೆ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ‘ಸಮಾಧಾನಪಟ್ಟುಕೊಂಡಿದ್ದಾರೆ’.

2004ರಲ್ಲಿ ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷವಾಗಿಯೇ ಇತ್ತು. ಆಗ ಕಳ್ಳರೇ ಪಕ್ಷದಲ್ಲಿ ತುಂಬಿಕೊಂಡಿದ್ದರು ಎಂದೂ ಅವರು ಮರೆತೊ ಅರಿತೊ ಪುನರುಚ್ಚರಿಸಿದ್ದಾರೆ.

‘ಸತ್ಯವನ್ನು ಹೇಳಬೇಕು’, ಆದರೆ ‘ಅಪ್ರಿಯ’ ಸತ್ಯವನ್ನು ಹೇಳಬಾರದೆಂಬ ಮಾತೊಂದಿದೆ. ಜನಪ್ರಿಯತೆ ಕಳೆದುಕೊಂಡು ‘ಅಪ್ರಿಯ’ವಾಗಿರುವ ಪಕ್ಷದ ಶಾಸಕರ ಬಾಯಿಯಿಂದ ಅಪ್ರಿಯ ಸತ್ಯವೇ ಹೊರಬಿದ್ದದ್ದು ಸಹಜ!
-ಪ್ರೊ. ಆರ್.ವಿ. ಹೊರಡಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT