ಹಬ್ಬಗಳು ಸಂಭ್ರಮಕ್ಕೆ, ಖುಷಿಗೆ ಕಾರಣವಾಗಬೇಕೇ ಹೊರತು ಅಪಾಯಕ್ಕೆ, ಆತಂಕಕ್ಕೆ ಕಾರಣವಾಗಬಾರದು. ಕಿವಿ ತಮಟೆ ಒಡೆದುಹೋಗುವಷ್ಟು ಸದ್ದಿನ ಪಟಾಕಿಯನ್ನು ಸಿಡಿಸುವವರು ಎಂದಾದರೂ ಈ ಸದ್ದು ಪುಟ್ಟ ಮಕ್ಕಳು, ಅಶಕ್ತರು, ರೋಗಿಗಳು, ವಯೋವೃದ್ಧರು, ಪ್ರಾಣಿಪಕ್ಷಿಗಳ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ಯೋಚಿಸಿದ್ದಾರೆಯೇ? ಇನ್ನಾದರೂ ಒಂದಿಷ್ಟು ಮಾನವೀಯವಾಗಿ ಯೋಚಿಸೋಣ. ಬೆಳಕಿನ ಹಬ್ಬವಾಗಿ ದೀಪಾವಳಿಯನ್ನು ಆಚರಿಸೋಣ.
-ಶ್ರೀನಿವಾಸ ಕಾರ್ಕಳ, ಮಂಗಳೂರು