ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ‘2016ರಲ್ಲಿ ನಡೆದ ಹಲ್ಲೆ ಪ್ರಕರಣದ ನಂತರ ಹುಟ್ಟಿಕೊಂಡ ವೈಯಕ್ತಿಕ ದ್ವೇಷ ಹಾಗೂ ಮುಕ್ಕಚ್ಚೇರಿ ಮಸೀದಿ ಆಡಳಿತಕ್ಕೆ ಸಂಬಂಧಿಸಿದ ತಕರಾರು ಈ ಕೊಲೆಗೆ ಕಾರಣ. ‘ಉಳ್ಳಾಲ ಟಾರ್ಗೆಟ್’ ಗುಂಪಿನ ಸುಹೈಲ್ ಅಲಿಯಾಸ್ ಅಬ್ದುಲ್ ರಹಿಮಾನ್ ಸುಹೈಲ್ (23), ನಿಜಾಮುದ್ದೀನ್ (23), ಮಹಮ್ಮದ್ ಮುಸ್ತಾಫ (21), ತಾಜುದ್ದೀನ್ ಅಲಿಯಾಸ್ ಹಸನ್ ತಾಜುದ್ದೀನ್ (24) ಮತ್ತು ಆಸಿಫ್ ಅಲಿಯಾಸ್ ಮಂದ ಆಸಿಫ್ (40) ಎಂಬುವವರನ್ನು ಬಂಧಿಸಲಾಗಿದೆ’ ಎಂದರು.