ನವದೆಹಲಿ: ರೈಲ್ವೆ ನಿಲ್ದಾಣಗಳ ಬಳಿಯ ಹೋಟೆಲ್ಗಳ ಗುತ್ತಿಗೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಬ್ಡಿದೇವಿ ಅವರು ಬುಧವಾರ ಗೈರು ಹಾಜರಾಗಿದ್ದರು.
ಈ ಹಿಂದೆ ಅವರಿಗೆ ಸಮನ್ಸ್ ಜಾರಿ ಮಾಡಿದ್ದರೂ ಎರಡು ಬಾರಿ ಗೈರಾಗಿದ್ದರು. ಬುಧವಾರದ ಗೈರು ಹಾಜರಿಗೆ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ. ಅಕ್ಟೋಬರ್ 16ರಂದು ವಿಚಾರಣೆಗೆ ಹಾಜರಾಗುವುದಾಗಿ ಅವರು ಕೇಳಿಕೊಂಡಿದ್ದಾಗಿ ಇ.ಡಿ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿಯಾದವ್ ಅವರನ್ನು ಮಂಗಳವಾರ ಇ.ಡಿ ವಿಚಾರಣೆ ನಡೆಸಿತ್ತು.