ಈ ಮೊದಲು ರಾಮಚಂದ್ರಾಪುರ ಮಠದ ವಿರುದ್ಧದ ಪ್ರಕರಣ ಎಚ್.ಜಿ.ರಮೇಶ್ ಅವರಿದ್ದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಇದರಲ್ಲಿ ಹಿರಿಯ ವಕೀಲ ವಕೀಲ ಬಿ.ವಿ.ಆಚಾರ್ಯ ಮಠದ ಪರವಾಗಿ ಹಾಜರಾಗಿದ್ದರು. ಆಗ ರಮೇಶ್, ‘ನಾನು ಆಚಾರ್ಯ ಅವರ ಬಳಿ ಕಿರಿಯ ವಕೀಲನಾಗಿ ಕೆಲಸ ಮಾಡಿದ್ದೇನೆ. ಆದ ಕಾರಣ ಈ ಪ್ರಕರಣದ ವಿಚಾರಣೆ ನಡೆಸುವುದಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಹಿಂದೆ ಸರಿದಿದ್ದರು.