ಚಿತ್ರದುರ್ಗ: ನಗರದ ಐತಿಹಾಸಿಕ ಹೊಂಡಗಳೆಲ್ಲ ಭರ್ತಿ. ಹೂಳುತೆಗಿಸಿದ ಬಹುತೇಕ ಹೊಂಡಗಳು ಕೋಡಿ ಬಿದ್ದಿವೆ. ಮುಂದೆ ಮಳೆಯಾದರೆ ನೀರು ಹಿಡಿದಿಡಲು ನಗರದಲ್ಲಿ ಜಲಪಾತ್ರೆಗಳೇ ಇಲ್ಲದಂತಾಗಿದೆ.
ಕೋಟೆಯ ಅಗಳು, ಅದರ ಹಿಂದಿನ ಒಡ್ಡುಗಳು, ಕರಿವರ್ತೀಶ್ವರ ಕಲ್ಯಾಣಿ, ಸಿಹಿನೀರು ಹೊಂಡ (ಅಪಾಯ ಮಟ್ಟ ಮೀರಿ ಹರಿದು ರಸ್ತೆಯೆಲ್ಲ ಕೊರಕಲಾಗಿದೆ), ಸಂತೆಹೊಂಡ ಕೋಡಿ ಹರಿದು ಸುತ್ತಲಿನ ನೆಲ ಮಾಳಿಗೆಗೆ ನೀರು ನುಗ್ಗಿದೆ.
(ಸಂತೆಹೊಂಡ ತುಂಬಿರುವ ದೃಶ್ಯ)
ಕಲ್ಯಾಣಿಗಳಿಗೆ ಕೊಂಡಿಯಾಗಿರುವ ನಗರದ ಹೊರವಲಯದ ಮಲ್ಲಾಪುರ, ಗೋನೂರು ಕೆರೆ ಭರ್ತಿಯಾಗಿದೆ.