ಅಭಿಯಾನದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆಯ 6ನೇ ಅಧ್ಯಾಯ ಪಠಿಸುವ ಕಾರ್ಯಕ್ರಮ ಇದ್ದು ಇದೇ 14 ರಂದು ಬೆಳಿಗ್ಗೆ 11 ಗಂಟೆಗೆ ಬಿ.ವಿ.ವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಕಣವಿ ವೀರಭದ್ರೇಶ್ವರ ಸಾಂಸ್ಕೃತಿಕ ಭವನದಲ್ಲಿ ಆಸಕ್ತರು, ಮಾತೆಯರು ಹಾಗೂ ಶಿಕ್ಷಕ ವರ್ಗವನ್ನುದ್ದೇಶಿಸಿ ಗೀತಾ ಸಾರದ ಕುರಿತು ಪ್ರವಚನ ನೀಡುವರು.