ತುಮಕೂರು: ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದೆ. ಮಧುಗಿರಿ ತಾಲ್ಲೂಕಿನ ಸುವರ್ಣಮುಖಿ ಹಳ್ಳ 40 ವರ್ಷದ ಬಳಿಕ ತುಂಬಿ ಹರಿದಿದೆ.
ಕೊರಟಗೆರೆ ತಾಲ್ಲೂಕಿನ ದೋಣಿಗರಹಳ್ಳಿ, ಸಿದ್ಧರಬೆಟ್ಟ ಹತ್ತಿರದ ಸಜ್ಕೆವಾನರಕಟ್ಟೆ (ಕ್ಯಾನಲ್ ಕಟ್ಟೆ) ಒಡೆದಿವೆ. ಸಜ್ಜೆವಾನರಕಟ್ಟೆ ಸಮೀಪದ ಅರವಿಂದ ಎಂಬುವರ ಕೋಳಿ ಫಾರಂನಲ್ಲಿ ಮಳೆ ನೀರು ನುಗ್ಗಿ 6000 ಕೋಳಿಗಳು ಸಾವಿಗೀಡಾಗಿವೆ.
ಇದೇ ಪ್ರದೇಶದಲ್ಲಿ ಆಸ್ಟ್ರಾ ಹೂವಿನ ತೋಟ, ರಾಗಿ ಹೊಲ ಹಾನಿಗೀಡಾಗಿವೆ.
ರಾತ್ರಿ ಸುರಿದ ಮಳೆಗೆ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ರಂಗಾಪುರ ಕೆರೆ ಬಿರುಕು ಬಿಟ್ಟಿದೆ. ತಹಶೀಲ್ದಾರ್ ಶ್ರೀನಿವಾಸ್, ನೀರಾವರಿ ಇಲಾಖೆ ಅಧಿಕಾರಿ ಜ್ಞಾನಮೂರ್ತಿ ಪರಿಶೀಲನೆ ನಡೆಸಿದರು.
(ಕೊರಟಗೆರೆ ತಾಲ್ಲೂಕು ತೋವಿನಕೆರೆ ಸಮೀಪ ಸಜ್ಜೆವಾನರ ಕಟ್ಟೆ ಒಡೆದು ರಾಗಿ ಬೆಳೆ ನೆಲಕ್ಕೆ ಬಿದ್ದಿರುವುದು)
(ಕೊರಟಗೆರೆ ತಾಲ್ಲೂಕು ತೋವಿನಕೆರೆ ಸಮೀಪದ ಸಜ್ಜೆ ವಾನರ ಕಟ್ಟೆ ಬುಧವಾರ ರಾತ್ರಿ ಸುರಿದ ಮಳೆಗೆ ಒಡೆದಿರುವುದು)