ಮುಗಳಖೋಡ: ಪಟ್ಟಣದೊಳಗಿನ ಮದ್ಯದ ಅಂಗಡಿಗಳನ್ನು ತೆರವುಗೊಳಿಸಿ, ಅರ್ಧ ಕಿಲೊಮೀಟರ್ ದೂರದಲ್ಲಿ ಆರಂಭಿಸುವಂತೆ ಮಾಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯಕರ್ತರು ಒತ್ತಾಯಿಸಿದರು.
ರಾಯಬಾಗ ಅಬಕಾರಿ ಇಲಾಖೆ ಸಿಪಿಐ ಮಲ್ಲನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಅನೇಕ ಸಲ ಮನವಿ ಮಾಡಿದರೂ ಪಟ್ಟಣದೊಳಗಿನ ಮದ್ಯದ ಅಂಗಡಿಗಳನ್ನು ತೆರವುಗೊಳಿಸಿಲ್ಲ, ಈಗಲಾದರೂ ಗ್ರಾಮಸ್ಥರ ಬೇಡಿಕೆ ಮನ್ನಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಅಧ್ಯಕ್ಷ ರಾಜಶೇಖರ ಶೇಗುಣಸಿ, ತಾಲ್ಲೂಕು ಘಟಕದ ಅಧ್ಯಕ್ಷ ಅರುಣ ಠಕ್ಕನ್ನವರ, ಅನೀಲ ಗೋಕಾಕ, ಶಂಕರ ಶೇಗುಣಸಿ, ಮುದಕಪ್ಪ ಶೇಗುಣಶಿ, ರಾಮಣ್ಣ ಶೇಗುಣಸಿ, ದೀಪಕ ತುಗದಲಿ, ದತ್ತು ಶೇಗುಣಸಿ, ಸಿದ್ರಾಮ ಶೇಗುಣಸಿ, ಗಣಪತಿ ಶೇಗುಣಸಿ ಭಾಗವಹಿಸಿದ್ದರು.