ದೇಶದ ವಿವಿಧೆಡೆಯಿಂದ 40 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. 12ರಂದು ಬೆಳಿಗ್ಗೆ 10.30ಕ್ಕೆಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಟೂರ್ನಿಗೆ ಚಾಲನೆ ನೀಡುವರು. ಸಂಸದ ಭಗವಂತ ಖೂಬಾ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್, ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಪ್ರಭು ಚವಾಣ್, ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಚಂದ್ರಶೇಖರ, ಬಾಲಾಜಿ ನರಸಿಂಹ, ಬಲಬೀರ್ಸಿಂಗ್, ಅಬ್ದುಲ್ ಖದೀರ್ ಅತಿಥಿಗಳಾಗಿ ಭಾಗವಹಿಸುವರು.