ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದ ಅವರು, ‘ನಾಗರಾಜ್ ಅವರಿಗೆ ವಸೂಲಿ ಕಲೆ ಗೊತ್ತು ಏಕೆಂದರೆ ಅವರಿಗೆ ಅದರಲ್ಲಿ ಅನುಭವವಿದೆ. ನಾನಾಗಲಿ ಅಥವಾ ಶಾಸಕರಾಗಲಿ ಮಾಡಿದ ಒಂದೇ ಒಂದು ಅವ್ಯವಹಾರವಾಗಲಿ, ದುಡ್ಡು ವಸೂಲಿ ಮಾಡಿದ ನಿದರ್ಶನವನ್ನು ಅವರು ತೋರಿಸಲಿ. ಇಲ್ಲವೇ, ಅವರು ಬಹಿರಂಗ ವೇದಿಕೆ ಸಿದ್ಧಪಡಿಸಲಿ ನಾನು ಬರುತ್ತೇನೆ. ಅದರಲ್ಲಿ ನಾಗರಾಜ್ ನಮ್ಮ ವಿರುದ್ಧದ ಆರೋಪ ಸಾಬೀತು ಮಾಡಲಿ’ ಎಂದು ಸವಾಲು ಹಾಕಿದರು.