ಶಾಲೆ ಮುಖ್ಯ ಶಿಕ್ಷಕ ಮಂಜೇಗೌಡ ಮಾತನಾಡಿ, ಪರಿಸರ ಮತ್ತು ನೀರನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ಹೇಳುವ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಶುದ್ಧ ನೀರನ್ನು ಬಳಸಿ ಆರೋಗ್ಯ ಕಾಪಾಡಿ ಕೊಳ್ಳಬೇಕು. ರಾಜ್ಯದ ಕೆಲವು ಕಡೆ 10, 20 ಕಿಲೋ ಮೀಟರ್ ನಡೆದು ನೀರನ್ನು ತರುವ ಪರಿಸ್ಥಿತಿ ಇದೆ. ನೀರು ಅಮೃತ ಸಮಾನ ಎಂದರು.