ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಬೆಂಗಳೂರಿನಲ್ಲಿ ಈಚೆಗೆ ಸುದ್ದಿಗೋಷ್ಠಿ ಕರೆದಿತ್ತು. ಮೊದಲು ಮಾತು ಆರಂಭಿಸಿದವರು ಚಿತ್ರದ ಕಫ್ತಾನ, ಅಂದರೆ ನಿರ್ದೇಶಕ, ಹರ್ಷ ಗೌಡ ಅವರು. ‘ಈ ಸಿನಿಮಾದ ಪಾತ್ರಗಳು ಕಾಲಯಂತ್ರವನ್ನು (ಟೈಮ್ ಮೆಷಿನ್) ಇಟ್ಟುಕೊಂಡು ಭೂತಕಾಲ ಹಾಗೂ ಭವಿಷ್ಯತ್ ಕಾಲಗಳಿಗೆ ಹೋಗಿ ಬರುತ್ತವೆ’ ಎನ್ನುತ್ತ ಮಾತಿಗೆ ಶುರುವಿಟ್ಟುಕೊಂಡರು.