ಕಾರ್ಮಿಕ ಸಂಘದ ಚುನಾವಣೆ ಸಂಬಂಧ ಬುಧವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ‘ಈ ಸಲ ಮತ್ತೆ ಎಐಟಿಯುಸಿ ಕೈಗೆ ಅಧಿಕಾರ ಹೋದರೆ ಗಣಿ ಸ್ಮಶಾನ, ಆಸ್ಪತ್ರೆ ಮರಣೋತ್ತರ ಕೇಂದ್ರವಾಗುತ್ತದೆ ಎಂದರು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ನಿಗಮದಿಂದ ಚಿನ್ನದ ಗಣಿ ಅಭಿವೃದ್ಧಿಗಾಗಿ ವಾರ್ಷಿಕ ₹ 1000 ಕೋಟಿ ಸಹಾಯ ಧನ ಪಡೆಯಲು ಟಿಯುಸಿಐ ಹೋರಾಟ ರೂಪಿಸಲಿದೆ’ ಎಂದು ಹೇಳಿದರು.