ಸೂರ್ಯ, ಭಾಸ್ಕರ, ಅರ್ಜುನ, ಆಲೆ, ಕಿರಣ ಸೊಂಡಿಲು ಹಿಡಿದು ನಡೆದವು. ನಂತರ ಕಿವಿ, ದಂತ ಹಿಡಿದು ಮೈದಾನದಲ್ಲಿ ಸಾಗಿದವು. ಸೂರ್ಯ, ಭಾಸ್ಕರ್, ಕಿರಣ, ಹೇಮಾವತಿ ಫುಟ್ಬಾಲ್ ಆಡಿದರೆ, ಕ್ರಿಕೆಟ್ನಲ್ಲಿ ಅರ್ಜುನ, ಆಲೆ, ಕಿರಣ ಸಿಕ್ಸರ್, ಬೌಂಡರಿ ಬಾರಿಸಿದಾಗ ಮಕ್ಕಳು ಕುಣಿದರು. ಬಾಳೆ ಹಣ್ಣು, ಕಬ್ಬು ತಿನ್ನುವ ಸ್ಪರ್ಧೆ ಯಲ್ಲಿ ರಾಘವೇಂದ್ರ ಹೊರತುಪಡಿಸಿ ಉಳಿದ 10 ಆನೆಗಳು ಭಾಗವಹಿಸಿದ್ದವು. ಒಟ್ಟಾರೆ ಸ್ಪರ್ಧೆಗಳಲ್ಲಿ ಭಾಸ್ಕರ ಮೊದಲನೆ ಸ್ಥಾನ, ಅರ್ಜುನ ಎರಡನೆ ಸ್ಥಾನ, ಹೇಮಾವತಿ ಮೂರನೆ ಸ್ಥಾನ, ಕಿರಣ ಸಮಾಧಾನಕರ ಬಹುಮಾನ ಪಡೆದರು.