ನವದೆಹಲಿ: ದೆಹಲಿ ಮುಖ್ಯಮುಂತ್ರಿ ಅರವಿಂದ ಕೇಜ್ರಿವಾಲ್ ಅವರ ಕಾರನ್ನು ಗುರುವಾರ ಕಳವು ಮಾಡಲಾಗಿದೆ.
’ದೆಹಲಿಯ ಸಚಿವಾಲಯದ ಹೊರಗೆ ಈ ಕಾರನ್ನು ನಿಲ್ಲಿಸಲಾಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಕಾರನ್ನು ಕಳವು ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನೀಲಿ ಬಣ್ಣದ ‘ವ್ಯಾಗನ್ ಆರ್’ ಕಾರನ್ನು ಕೇಜ್ರಿವಾಲ್ ಅವರಿಗೆ 2013ರ ಜನವರಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಕುಂದನ್ ಶರ್ಮಾ ಎನ್ನುವವರು ಕಾಣಿಕೆಯಾಗಿ ನೀಡಿದ್ದರು.
ಆಮ್ ಆದ್ಮಿ ಪಕ್ಷದ ಜತೆಯೂ ಗುರುತಿಸಿಕೊಂಡಿದ್ದ ಈ ಕಾರನ್ನು ಅರವಿಂದ ಕೇಜ್ರಿವಾಲ್ ಅವರು 2015ರ ವಿಧಾನಸಭೆ ಚುನಾವಣೆಯವರೆಗೂ ಅತಿ ಹೆಚ್ಚು ಬಳಸಿದ್ದರು. ಇತ್ತೀಚಿನ ದಿನಗಳಲ್ಲಿ ಪಕ್ಷದ ಪದಾಧಿಕಾರಿಗಳು ಈ ಕಾರನ್ನು ಬಳಸುತ್ತಿದ್ದರು.