ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ತಂಡಕ್ಕೆ ಜಯ

Last Updated 12 ಅಕ್ಟೋಬರ್ 2017, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಎಮ್ ಶ್ರೇಯಸ್ (17ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕೆಎಸ್‌ಸಿಎ ತಂಡ 19 ವರ್ಷದೊಳಗಿನವರ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಗುರುವಾರ ತಮಿಳುನಾಡು ಸಂಸ್ಥೆ ಎದುರು 8 ವಿಕೆಟ್‌ಗಳಿಂದ ಜಯಿಸಿತು.

ಮೊದಲು ಬ್ಯಾಟ್ ಮಾಡಿದ ತಮಿಳು ನಾಡು ತಂಡ 20.3 ಓವರ್‌ಗಳಲ್ಲಿ 80 ರನ್‌ಗಳಿಗೆ ಆಲೌಟ್‌ ಆಯಿತು. ಕೆಎಸ್‌ಸಿಎ ತಂಡ 18.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಶ್ರೇಯಸ್‌ ಕೇವಲ 17 ರನ್‌ಗಳನ್ನು ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಅಮನ್‌ ಖಾನ್‌ 21 ರನ್‌ಗಳಿಗೆ ಎರಡು ವಿಕೆಟ್ ಕಬಳಿಸಿದರು. ಬಳಿಕ ಸುಲಭ ಗುರಿ ಬೆನ್ನಟ್ಟಿದ ಕೆಎಸ್‌ಸಿಎ ತಂಡಕ್ಕೆ ದೇವ್‌ ಪಡಿಕ್ಕಲ್‌ ಆಸರೆಯಾದರು. ಈ ಆಟಗಾರ 43 ರನ್‌ಗಳನ್ನು ದಾಖಲಿಸಿದರು. ನಿಕಿನ್ ಜೋಸ್ ಅಜೇಯ 21 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ತಮಿಳುನಾಡು ಸಂಸ್ಥೆ: 20.3 ಓವರ್‌ಗಳಲ್ಲಿ 80 (ಬಿ.ಎಮ್‌ ಶ್ರೇಯಸ್‌ 17ಕ್ಕೆ4, ಅಮನ್ ಖಾನ್‌ 21ಕ್ಕೆ2). ಕೆಎಸ್‌ಸಿಎ: 18.3 ಓವರ್‌ಗಳಲ್ಲಿ 2 ವಿಕೆಟ್‌ಗೆ 81 (ದೇವ್ ಪಡಿಕ್ಕಲ್‌ 43, ಎಸ್‌.ಜೆ ನಿಕಿನ್ ಜೋಸ್‌ ಅಜೇಯ 21). ಫಲಿತಾಂಶ: ಕೆಎಸ್‌ಸಿಎ ತಂಡಕ್ಕೆ 8 ವಿಕೆಟ್‌ಗಳ ಜಯ.

ಆಂಧ್ರ ಸಂಸ್ಥೆ: 31 ಓವರ್‌ಗಳಲ್ಲಿ 151( ವಂಶಿಕೃಷ್ಣ 37, ವಿನಯ್‌ 30; ಅಜಯ್‌ ಗೌಡ 30ಕ್ಕೆ4, ಅನಿಕೇತ ರೆಡ್ಡಿ 33ಕ್ಕೆ4). ಹೈದರಾಬಾದ್: 26 ಓವರ್‌ಗಳಲ್ಲಿ 99 (ಎನ್‌ ತಿಲಕ್ 30, ಗಿರೀಶ ರೆಡ್ಡಿ 21ಕ್ಕೆ2, ವಿನಯ್‌ 13ಕ್ಕೆ5). ಫಲಿತಾಂಶ: ಆಂಧ್ರ ತಂಡಕ್ಕೆ 52 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT