ಬಸವಕಲ್ಯಾಣ: ಪ್ರವಾಸಕ್ಕೆ ತೆರಳಿದ್ದ ಇಲ್ಲಿನ ಸಂಕಲ್ಪ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲ್ಲೂಕಿನ ನಿರ್ಗುಡಿ ಗ್ರಾಮದ ಯೋಗೇಶ ವಿಜಯಕುಮಾರ ಶೇಡೋಳೆ (17) ಮೃತಪಟ್ಟವರು.
ಸೋಮವಾರ ಮಹಾರಾಷ್ಟ್ರದ ಅಕಲೂಜ್ನಲ್ಲಿನ ವಾಟರ್ ಪಾರ್ಕ್ಗೆ ಹೋಗಿದ್ದ ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು ಆದ್ದರಿಂದ ವಿದ್ಯಾರ್ಥಿ ಕುಸಿದುಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಶವಪರೀಕ್ಷೆ ವರದಿ ಬಂದಾಗ ಮಾತ್ರ ಎಲ್ಲವೂ ಗೊತ್ತಾಗಲಿದೆ ಎಂದು ಮೃತನ ತಂದೆ ವಿಜಯಕುಮಾರ ಹೇಳಿದ್ದಾರೆ.