ರಾಣೆಬೆನ್ನೂರು: ‘ಮಹಿಳೆಯರಿಗೆ ಕಾನೂನು ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪಲತಾ ಹೇಳಿದರು. ತಾಲ್ಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಈಚೆಗೆ ನಡೆದ ‘ಮಹಿಳಾ ಜನಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕ ಮಹಾಬಲ ಕುಲಾಲ ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಸಾಲ ನೀಡುವುದು ಮತ್ತು ವಸೂಲಿ ಮಾಡುವುದನ್ನು ಮಾತ್ರ ಮಾಡುತ್ತಿಲ್ಲ, ಬದಲಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿ ಸಾಮಾಜ ಸೇವೆಯನನ್ನು ಮಾಡುತ್ತಿದೆ’ ಎಂದರು.
ನಿವೃತ್ತ ಆರೋಗ್ಯ ಅಧಿಕಾರಿ ಎಸ್.ಎಸ್.ಕುಶಲದ ಹಾಗೂ ಅನುಪಮಾ ಎಸ್.ಕಣವಿ ಮಾತನಾಡಿದರು. ಬಸವಣ್ಣೆಪ್ಪ ಹೆಗ್ಗಪ್ಪನವರ, ಯೊಜನಾಧಿಕಾರಿ ಈಶ್ವರ್ ಎಂ.ಎಸ್., ಶಶಿಕಲಾ ಬಂಗೇರ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರುತಿ, ರವಿ, ಶ್ರೀನಿವಾಸ ಇದ್ದರು.