ಮಂಗಳೂರು: ಪ್ರಧಾನಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡುವ ಮೂಲಕ ರಾಜ್ಯದ ಸಚಿವರು ಕರ್ನಾಟಕದ ಮಾನವನ್ನು ಹರಾಜು ಹಾಕುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪ್ರಜೆಯಾಗಿ ಇದನ್ನು ಖಂಡಿಸುತ್ತೇನೆ. ರಾಜ್ಯದ ಮಂತ್ರಿಗಳು ಇಂತಹ ಭಾಷೆಯನ್ನು ಬಳಕೆ ಮಾಡಿರುವುದು ಕರ್ನಾಟಕದ ಸಂಸ್ಕೃತಿಯಲ್ಲ. ಇದನ್ನು ಈಗಲೇ ನಿಯಂತ್ರಿಸಬೇಕಾಗಿದೆ ಎಂದರು.
ಇದಕ್ಕಾಗಿ ರಾಜ್ಯದಾದ್ಯಂತ ಶನಿವಾರದಿಂದಲೇ I am Modi ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಹೇಳಿದರು.