ಬೆಂಗಳೂರು: ತೀವ್ರ ಹೋರಾಟ ನಡೆಸಿದ ಶ್ರೇಯಸ್ ಕುಲಕರ್ಣಿ ಹಾಗೂ ಎಮ್.ಅನರ್ಘ್ಯಾ ಇಲ್ಲಿ ನಡೆದ ಎಮ್.ಎಸ್ ರಾಮಯ್ಯ ಸ್ಮಾರಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
ಯೂತ್ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಶ್ರೇಯಸ್ 11–4, 11–5, 6-11, 11–8, 11–6ರಲ್ಲಿ ಬಿ.ರಕ್ಷಿತ್ ಎದುರು ಗೆದ್ದರು.
ಸೆಮಿಫೈನಲ್ನಲ್ಲಿ ಶ್ರೇಯಸ್ 5–11, 11–7, 6–11, 11–9, 11–6, 6–11, 11–5ರಲ್ಲಿ ಸಮರ್ಥ್ ಕುರ್ದಿಕೇರಿ ಅವರನ್ನು ಮಣಿಸಿ ಫೈನಲ್ ತಲುಪಿದ್ದರು.
ಬಾಲಕಿಯರ ವಿಭಾಗದಲ್ಲಿ ಅನರ್ಘ್ಯ 11–5, 10–12, 11–7, 11–7, 11–8ರಲ್ಲಿ ಎ. ಸಂಯುಕ್ತಾ ವಿರುದ್ಧ ಜಯಿಸಿದರು. ಸೆಮಿಫೈನಲ್ ಹೋರಾಟದಲ್ಲಿ 11–5, 11–5, 11–6, 11–4ರಲ್ಲಿ ಯಶಸ್ವಿನಿ ಅವರನ್ನು ಮಣಿಸಿದ್ದರು.
ಸಂಯುಕ್ತಾಗೆ ಪ್ರಶಸ್ತಿ: ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಎ.ಸಂಯುಕ್ತಾ 8–11, 1–11, 11–8, 11–3, 11–3, 2–10ರಲ್ಲಿ ಸೆಜಲ್ ಕೌಶಿಕ್ ವಿರುದ್ಧ ಜಯಭೇರಿ ದಾಖಲಿಸಿದರು.