ಚಿತ್ರದುರ್ಗ: ನಗರದ ಐತಿಹಾಸಿಕ ಚಂದ್ರವಳ್ಳಿಯ ಬಂಡೆಗಳ ಮೇಲೆ ಸುರಿಯುತ್ತಿರುವ ನೀರು ಜಲಪಾತದಂತೆ ಕಂಗೊಳಿಸುತ್ತಿದೆ.
ಮಕ್ಕಳು, ಯುವಕರು ಹರಿವ ನೀರಿಗೆ ಮೈಯೊಡ್ಡಿ ಸಂಭ್ರಮಿಸುತ್ತಿದ್ದಾರೆ. ಮೀನು ಹಿಡಿಯುವವರು ಹರಿಯುವ ನೀರಿಗೆ ಅಡ್ಡಲಾಗಿ ಪ್ಲಾಸ್ಟಿಕ್ ಕವರ್, ತೆಳುವಾದ ಬಟ್ಟೆಗಳನ್ನು ಅಡ್ಡ ಹಿಡಿಯುತ್ತಿದ್ದಾರೆ.
ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಂದ್ರವಳ್ಳಿ ಬಂಡೆಯ ಮೇಲೆ ಈ ಜಲಪಾತ ಸೃಷ್ಟಿಯಾಗಿದೆ.