‘ಮಳೆಯಾದಾಗಲೆಲ್ಲ ಪಟ್ಟಣದ ಚರಂಡಿಗಳ ನೀರು ಇಳಿಜಾರು ಪ್ರದೇಶದಲ್ಲಿನ ಓಣಿಗಳಿಗೆ ಹರಿದು ಬಂದು ಸಂಗ್ರಹಗೊಳ್ಳುತ್ತದೆ. ಆದ್ದರಿಂದ ಕೈಕಾಡಿ ಓಣಿ, ಈಶ್ವರನಗರ, ಮಾಂಗಗಾರುಡಿ ಓಣಿ, ಸತ್ಯನಾರಾಯಣ ಓಣಿಗಳಲ್ಲಿನ ಮನೆಗಳು ಜಲಾವೃತಗೊಳ್ಳುತ್ತವೆ. ಈ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರು ಒತ್ತಾಯಿಸಿದರು.