ಪ್ರತಿದಿನ ಮುಂಜಾನೆ ನೀರು, ವಿಭೂತಿ, ಕುಂಕುಮ ಮೊದಲಾದ ಪೂಜಾ ಸಾಮಗ್ರಿಗಳೊಂದಿಗೆ ಶಾಲಾ ವಿದ್ಯಾರ್ಥಿಗಳೊಂದಿಗೆ ಗ್ರಾಮದ ಹೊರಗಿನ ಬಯಲು ಪ್ರದೇಶಕ್ಕೆ ಬರುವ ದೇವ ರಾಜ ಅವರು, ತಂಬಿಗೆ ಹಿಡಿದು ಬಯಲಿಗೆ ಹೊರಟವರನ್ನು ತಡೆದು ಅವರ ಪಾದಪೂಜೆ ಮಾಡುತ್ತಾರೆ. ನಂತರ ಮನೆಯಲ್ಲಿ ನಿರ್ಮಿಸಿರುವ ಶೌಚಾಲಯವನ್ನೆ ಬಳಸಿ ಎಂದು ಮನವಿ ಮಾಡುತ್ತಾರೆ.