ಗುತ್ತಲ: ಇಲ್ಲಿಗೆ ಸಮೀಪದ ಹಾವನೂರ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಗ್ರಾಮದಲ್ಲಿ ಕೊಯ್ಲಿಗೆ ಬಂದ 10 ಎಕರೆಗೂ ಅಧಿಕ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ.
ದ್ಯಾವಣ್ಣ ಬುಳಬುಳ್ಳಿ ಎಂಬುವವರಿಗೆ ಸೇರಿದ 8 ಎಕರೆ ಭತ್ತದ ಜಮೀನಿನಲ್ಲಿ 3 ಎಕರೆಗೂ ಅಧಿಕ ಬೆಳೆ ಹಾಗೂ ನಿಂಗಪ್ಪ ಕೆಂಗನಿಂಗಪ್ಪನವರ ಅವರಿಗೆ ಸೇರಿದ 8 ಎಕರೆ ಜಮೀನಿನಲ್ಲಿ 2 ಎಕರೆಗೂ ಅಧಿಕ ಭತ್ತದ ಬೆಳೆ ನಾಶವಾಗಿದೆ. ತುಕ್ಕರಾಮ ಗೋಣ್ಣಿ, ದೇಗಪ್ಪ ಗೋಣ್ಣಿ ಅವರ ಬೆಳೆಯೂ ಹಾನಿಯಾಗಿದೆ.