ತಾಲ್ಲೂಕಿನ ಮತ್ತೂರು, ಕಾತರಕಿ, ಗುಡ್ಲಾನೂರು, ಹನಕುಂಟಿ ಪ್ರದೇಶಗಳ ನೂರಾರು ಎಕರೆಯಲ್ಲಿ ರೈತರು ಹಲವು ವಿಧದ ಬೆಳೆ ಬೆಳೆದಿದ್ದರು. ಆರಂಭಿಕ ಸಾಧಾರಣ ಮಳೆಗೆ ಸಸಿಗಳು ಚೆನ್ನಾಗಿಯೇ ಚಿಗುರಿದ್ದವು. ಮುಂಗಾರು ಹಂಗಾಮಿನಲ್ಲಿ ಮಳೆಯ ಲಕ್ಷಣ ಕಾಣಲಿಲ್ಲ. ಸಹಜವಾಗಿ ರೈತರು ಅಣೆಕಟ್ಟೆ ಹಿನ್ನೀರು ಪ್ರದೇಶದ ಖಾಲಿ ಜಾಗದಲ್ಲಿ ತಮ್ಮ ಬೆಳೆ ಪ್ರದೇಶ ವಿಸ್ತರಿಸಿದರು.