ಇಲ್ಲಿನ ದೀವರ ಯುವ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ‘ಭೂಮಣ್ಣಿ ಬುಟ್ಟಿಗಳ ಪ್ರದರ್ಶನ’ದಲ್ಲಿ ಮಾತನಾಡಿದ ಅವರು, ‘ಈ ಭಾಗದಲ್ಲಿ ಮೌಢ್ಯದ ಹೆಸರಿನಲ್ಲಿ ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಕ್ಕೆ ಕಳುಹಿಸುವ ಪದ್ಧತಿ ಆಚರಣೆಯಲ್ಲಿರುವುದು ಸುದ್ದಿಯಾಗುತ್ತಿದೆ. ಆದರೆ, ಇಂತಹ ಪದ್ಧತಿಯನ್ನು ಪ್ರಶ್ನಿಸಲು ಹೋದರೆ ಜನ ಮೈಮೇಲೆ ಬರುತ್ತಾರೆ’ ಎಂದರು.