ನವದೆಹಲಿ: ಭಾರತದಲ್ಲಿ ಚಿಕಿತ್ಸೆ ಪಡೆಯಲು ಮುಂದಾದ ಪಾಕಿಸ್ತಾನದ ರೋಗಿಗಳಿಗೆ ವೀಸಾ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಯಕೃತ್ತು, ಮೂತ್ರಪಿಂಡದಂತಹ ಅಂಗಾಂಗ ಕಸಿ ಅಗತ್ಯವಿರುವ ಮತ್ತು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನದ ರೋಗಿಗಳ ಸಂಬಂಧಿಗಳು ಚಿಕಿತ್ಸೆಗಾಗಿ ವೀಸಾ ನೀಡುವಂತೆ ಟ್ವೀಟ್ಟರ್ ಮೂಲಕ ಭಾರತ ಸರ್ಕಾಕ್ಕೆ ಮನವಿ ಮಾಡಿಕೊಂಡಿದ್ದರು.
ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ವೀಸಾ ನೀಡುವಂತೆ ಇಸ್ಲಾಮಾಬಾದ್ನಲ್ಲಿರುವ ಭಾರತದ ಹೈಕಮಿಷನ್ ಕಚೇರಿಗೆ ತಿಳಿಸಿದ್ದಾರೆ. ಭಾರತ ಸರ್ಕಾರದ ಈ ನಿಲುವಿಗೆ ಪಾಕಿಸ್ತಾನಿಯರು ಕೃತಜ್ಞತೆ ಸಲ್ಲಿಸಿದ್ದಾರೆ.