‘ಸಿಬ್ಬಂದಿ ಕೊರತೆ ಇದೆ. ಹಾಗಾಗಿ, ರೋಗಿಯ ಸಂಬಂಧಿಕರಿಗೆ ಆಮ್ಲಜನಕದ ಸಿಲಿಂಡರ್ ತೆಗೆದುಕೊಂಡು ಹೋಗಲು ಹೇಳಿದ್ದೇವೆ. ರೋಗಿಯ ಜೊತೆಗೆ ಐದಾರು ಜನ ಇದ್ದುದರಿಂದ ಹೇಳಲಾಗಿದೆ. ಬೇಗ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯಕೀಯ ಸಿಬ್ಬಂದಿ ಹೀಗೆ ಮಾಡಿದ್ದಾರೆ’ ಎಂದು ಕಿಮ್ಸ್ ನಿರ್ದೇಶಕರ ಡಾ. ದತ್ತಾತ್ರೇಯ ಬಂಟ್ ಸುದ್ದಿಗಾರರಿಗೆ ತಿಳಿಸಿದರು.