ಕಂಪ್ಲಿ: ಮಾಲಿನ್ಯರಹಿತ, ಪರಿಸರಸ್ನೇಹಿ ಸೌರ ವಿದ್ಯುತ್ ಉತ್ಪಾದನೆಗೆ ಮನಸೋತ ರೈತ ತಮ್ಮ 10 ಎಕರೆ ಜಮೀನಿನಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿದ್ದಾರೆ. ಕಂಪ್ಲಿ ಪಟ್ಟಣ ಹೊರವಲಯದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಸಣಾಪುರ ವಿತರಣಾ ನಾಲೆ ಪಕ್ಕದಲ್ಲಿ ಎಂ. ತುಳಸಿರಾಮ್ ಎಂಬುವರು ಸೋಲಾರ್ನಿಂದ ಉತ್ಪಾದನೆಯಾದ ವಿದ್ಯುತ್ತನ್ನು ವಿದ್ಯುತ್ ಕಂಪೆನಿಗೆ(ಜೆಸ್ಕಾಂ) ಮಾರಾಟ ಮಾಡುವ ಮೂಲಕ ಹೊಸ ಸಾಧನೆಗೆ ಮುನ್ನುಡಿ ಬರೆದಿದ್ದಾರೆ.