ನೀರು ಹರಿಯುವ ಜಾಗವನ್ನು ಅತಿಕ್ರಮಣ ಮಾಡಿ, ಅನಧಿಕೃತವಾಗಿ ಕಟ್ಟಡ ನಿರ್ಮಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಬದಲು ಅಂಥವರಿಗೆ ಪ್ರೋತ್ಸಾಹ ನೀಡಿದ ಸರ್ಕಾರವೇ ಎಲ್ಲ ಅನಾಹುತಗಳಿಗೆ ನೇರ ಹೊಣೆ. ಅಕ್ರಮ- ಸಕ್ರಮ ಯೋಜನೆಯ ಅನ್ವಯ ಒತ್ತುವರಿದಾರರಿಂದ ದಂಡ ವಸೂಲಿ ಮಾಡಿ ಬೀಗಿದ ಸರ್ಕಾರಕ್ಕೆ ಹೋದ ಜೀವಗಳನ್ನು ಮರಳಿ ತರುವ ಶಕ್ತಿ ಇದೆಯೇ?