ಈ ಹಿಂದೆ ಒಮ್ಮೆ ಬಿ.ಎಸ್. ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಬಗ್ಗೆ ಏಕವಚನ ಪ್ರಯೋಗಿಸಿದಾಗ ಸ್ವಯಂ ಮುಖ್ಯಮಂತ್ರಿಗಳೇ ಅದನ್ನು ವಿರೋಧಿಸಿದ್ದರು. ಒಟ್ಟಿನಲ್ಲಿ ನಾಲಿಗೆಗೆ ಅದರಲ್ಲೂ ರಾಜಕಾರಣಿಗಳ ನಾಲಿಗೆಗೆ ಆಚಾರವಿಲ್ಲ! ಕೋಪ ತಾಪಗಳು ವಸ್ತುನಿಷ್ಠವಾಗಿರಬೇಕೇ ವಿನಾ ವ್ಯಕ್ತಿನಿಷ್ಠವಾಗಿ ಅಲ್ಲ ಎಂಬ ಸಂಗತಿ ಇವರಿಗೇಕೆ ಅರ್ಥವಾಗುತ್ತಿಲ್ಲ?