ಮಕ್ಕಳಿಗಿರುವ ಪರಿಸರ ಕಾಳಜಿ ದೊಡ್ಡವರಿಗೆ ಇಲ್ಲ. ಪರಿಸರ ನಿರ್ಲಕ್ಷ್ಯ ಮಾಡಿದರೆ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಹೀಗಾಗಿ ಪರಿಸರ ರಕ್ಷಣೆ ಎಲ್ಲರ ಹೊಣೆ ಎಂದು ಹೇಳಿದರು. ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ, ಪರಿಸರ ಎಂದರೆ ಕುಟುಂಬ. ಗಿಡಗಳೂ ಅಪ್ಪ , ಅಮ್ಮ, ಅಣ್ಣ , ತಂಗಿ
ಇದ್ದಂತೆ. ತಂದೆ, ತಾಯಿ ಹೇಗೆ ಮಕ್ಕಳನ್ನು ಆರೈಕೆ ಮಾಡುತ್ತಾರೋ ಹಾಗೆಯೇ ಗಿಡ-ಮರಗಳು, ನೀರು, ನೆರಳು, ಆಮ್ಲಜನಕ, ಹೂವು, ಹಣ್ಣು ಎಲ್ಲವನ್ನೂ ಕೊಟ್ಟು ಆರೈಕೆ ಮಾಡುತ್ತವೆ. ಎಲ್ಲರೂ ಮರ, ಗಿಡಗಳ ಮಹತ್ವ ತಿಳಿಯ ಬೇಕು ಎಂದು ಸಲಹೆ ನೀಡಿದರು.